Saturday, December 17, 2011

ಲೈಫು ಇಷ್ಟೇನೆ ..


ಕೆಲಸ ಅನ್ನೋ ಕನಸ ಹೊತ್ತು ....
ಬೆಂಗಳೂರು ಅನ್ನೋ ಮಹಾನಗರ ಸುತ್ತು ...
ಕೇಳಿ ಸಾಕಾಯ್ತು ಪರರ ಮಾತು ....
ಸಹಾಯ ಅಪೇಕ್ಷಿಸ ಬೇಡ ಯಾವತ್ತು ...

ಕೆಲಸ ಇಲ್ಲ ಅಂತ ಮರುಗಬೇಡ ...
ಆತ್ಮ ಸ್ತ್ಯರ್ಯ ಕುಗ್ಗಲು ಬಿಡಬೇಡ  ...
ಅವರಿವರ ಮಾತಿಗೆ ಕಿವಿ ಕೊಡಬೇಡ ....
ಮೂರ್ಖತನದ ಪರಮಾವದಿಯಲ್ಲಿ ಸಿಲುಕಬೇಡ....
ದೊಡ್ಡ ದೊಡ್ಡ IT building ನೋಡಲೇ ಬೇಡ ...

ಬಂದೆ ಬರುತದೆ ಆ ಕ್ಷಣ ...
ಕಟ್ಟಿದ ಕನಸು ನನಸಾಗೋ ದಿನ  ...
ಆ ಕ್ಷಣಕೆ  ತಾಳ್ಮೆಯಿಂದ ಕಾಯೋಣ ...
ಅನುಭವಿಸು ಪ್ರತಿ ಕ್ಷಣ ....
ಆಮೇಲೆ ಇದ್ದೆ ಇರುತದೆ manager ಗಳ ಅಂಬೋಣ ...
Just Chill ಅನ್ನೋಣ ..
Enjoy ಮಾಡೋಣ .... 

Tuesday, December 6, 2011

ಪುಟ್ಟ ಮೀನಿನ ಕಣ್ಣೀರ ಕತೆ.......



ಇಂದು ನಾ ಕಂಡೆ ಪುಟ್ಟ ಮೀನನು ...
ಯಾರಿಗೆ ಹೇಳೋದು ಅದರ ಕಣ್ಣೀರ ಕತೆಯನು ..
ನದಿಯ ಆಳದಲಿ ಕನಸ ಹೊತ್ತ  ಮೀನಿದೆ ...
ತಾಯಿಯ ಮಡಿಲಲಿ ನೀರಿನ ತಳದಲಿ ಆಡುತಿಹ ಅದರ ಮರಿಯಿದೆ ..
ಮಾನವನ ಆಸೆಯ ಬಲೆಗೆ ಸಿಲುಕಿ ಪ್ರಾಣ ಪಕ್ಷಿ ಹಾರಿಹೋಗಿದೆ ...
ನೀರಿನಲಿ ತೇಲುತಿಹ ಆ ಮೀನನು ನಾ ನೋಡಿದೆ ...
ಈ ಕರುಣೆಯಿರದ ನಾಡಿನಲಿ ನಿನ್ನ ನೋಡಿ ನಾ ಪರಿತಪಿಸಿದೆ ...
ವಿಶಾಲವಾದ ನದಿಯಲಿ ಆ ಪುಟ್ಟ ಮೀನಿನ ಕಣ್ಣಿರು ಯಾರಿಗೂ ಕಾಣದಾಗಿದೆ ..
ನಿನ್ನ ಆತ್ಮ ಶಾಂತಿಗೆ ದೇವರಲ್ಲಿ ನಾ ಪ್ರಾರ್ಥಿಸುವೆ ...