Saturday, December 17, 2011

ಲೈಫು ಇಷ್ಟೇನೆ ..


ಕೆಲಸ ಅನ್ನೋ ಕನಸ ಹೊತ್ತು ....
ಬೆಂಗಳೂರು ಅನ್ನೋ ಮಹಾನಗರ ಸುತ್ತು ...
ಕೇಳಿ ಸಾಕಾಯ್ತು ಪರರ ಮಾತು ....
ಸಹಾಯ ಅಪೇಕ್ಷಿಸ ಬೇಡ ಯಾವತ್ತು ...

ಕೆಲಸ ಇಲ್ಲ ಅಂತ ಮರುಗಬೇಡ ...
ಆತ್ಮ ಸ್ತ್ಯರ್ಯ ಕುಗ್ಗಲು ಬಿಡಬೇಡ  ...
ಅವರಿವರ ಮಾತಿಗೆ ಕಿವಿ ಕೊಡಬೇಡ ....
ಮೂರ್ಖತನದ ಪರಮಾವದಿಯಲ್ಲಿ ಸಿಲುಕಬೇಡ....
ದೊಡ್ಡ ದೊಡ್ಡ IT building ನೋಡಲೇ ಬೇಡ ...

ಬಂದೆ ಬರುತದೆ ಆ ಕ್ಷಣ ...
ಕಟ್ಟಿದ ಕನಸು ನನಸಾಗೋ ದಿನ  ...
ಆ ಕ್ಷಣಕೆ  ತಾಳ್ಮೆಯಿಂದ ಕಾಯೋಣ ...
ಅನುಭವಿಸು ಪ್ರತಿ ಕ್ಷಣ ....
ಆಮೇಲೆ ಇದ್ದೆ ಇರುತದೆ manager ಗಳ ಅಂಬೋಣ ...
Just Chill ಅನ್ನೋಣ ..
Enjoy ಮಾಡೋಣ .... 

Tuesday, December 6, 2011

ಪುಟ್ಟ ಮೀನಿನ ಕಣ್ಣೀರ ಕತೆ.......



ಇಂದು ನಾ ಕಂಡೆ ಪುಟ್ಟ ಮೀನನು ...
ಯಾರಿಗೆ ಹೇಳೋದು ಅದರ ಕಣ್ಣೀರ ಕತೆಯನು ..
ನದಿಯ ಆಳದಲಿ ಕನಸ ಹೊತ್ತ  ಮೀನಿದೆ ...
ತಾಯಿಯ ಮಡಿಲಲಿ ನೀರಿನ ತಳದಲಿ ಆಡುತಿಹ ಅದರ ಮರಿಯಿದೆ ..
ಮಾನವನ ಆಸೆಯ ಬಲೆಗೆ ಸಿಲುಕಿ ಪ್ರಾಣ ಪಕ್ಷಿ ಹಾರಿಹೋಗಿದೆ ...
ನೀರಿನಲಿ ತೇಲುತಿಹ ಆ ಮೀನನು ನಾ ನೋಡಿದೆ ...
ಈ ಕರುಣೆಯಿರದ ನಾಡಿನಲಿ ನಿನ್ನ ನೋಡಿ ನಾ ಪರಿತಪಿಸಿದೆ ...
ವಿಶಾಲವಾದ ನದಿಯಲಿ ಆ ಪುಟ್ಟ ಮೀನಿನ ಕಣ್ಣಿರು ಯಾರಿಗೂ ಕಾಣದಾಗಿದೆ ..
ನಿನ್ನ ಆತ್ಮ ಶಾಂತಿಗೆ ದೇವರಲ್ಲಿ ನಾ ಪ್ರಾರ್ಥಿಸುವೆ ...










































Thursday, November 10, 2011

ಮನದಾಳದ ಮಾತು: ....ಹೇಳಿ ಕೇಳಿ ಇದು ನಮ್ಮ ಬೆಂಗಳೂರು....

ಮನದಾಳದ ಮಾತು: ....ಹೇಳಿ ಕೇಳಿ ಇದು ನಮ್ಮ ಬೆಂಗಳೂರು....: ಬೆಂಗಳೂರಿಗೆ ಬಂದು MORNING WALK ಮಾಡಿ ನಂತರ ನಮಗೆ ಹೇಳಿ .. ಬೆಂಗಳೂರು ಅನ್ನೋ ಮಹಾನಗರಿ ... ಇಲ್ಲಿ ಆಗ್ತಾ ಇರೋದು FULL TRAGEDY... TRAFFIC VERY TERRIF...

....ಹೇಳಿ ಕೇಳಿ ಇದು ನಮ್ಮ ಬೆಂಗಳೂರು....



ಬೆಂಗಳೂರಿಗೆ ಬಂದು  MORNING WALK ಮಾಡಿ ನಂತರ ನಮಗೆ ಹೇಳಿ ..

ಬೆಂಗಳೂರು ಅನ್ನೋ ಮಹಾನಗರಿ ...

ಇಲ್ಲಿ ಆಗ್ತಾ ಇರೋದು FULL TRAGEDY...

TRAFFIC  VERY TERRIFIC....

ನಮ್ಮ ಮೆಟ್ರೋ ಗೆ ಜಾಗ ಬಿಡಿ ಅಂತಾರೆ 80 ft ರೋಡ್ ನ  8ft ಮಾಡಿದಾರೆ...

ಮಳೆಯಲಿ DRAINAGE ನೀರು ROAD ನಲಿ ..ನಮ್ಮ ಜೊತೆ ಜೊತೆಯಲಿ ...

ದೊಡ್ಡ ದೊಡ್ಡ ನಾಯಿಗಳು ದುಡ್ಡಿರೋವರ ಮನೆಯಲಿ.. MORNING ಸು ಸು ಮಾಡಿಸ್ತಾರೆ ಜನ ನಡೆದಾಡುವ ಬೀದಿಯಲಿ ...

FOOT PATH ಮೇಲೆ ಹುಡುಗಿರು CAT ವಾಕ್ ನಲಿ ...ತಪ್ಪಿ ನಾವು ನೋಡಿದ್ರೆ BMTC ಕ್ರಪೆಯಿಂದ ನಾವು ಬರುತಿವಿ  FRAME ಹಾಕಿರೋ ಫೋಟೋಲಿ ..

ಹೋಗ್ರಪ್ಪ ಸುತ್ತಾಡನ ಅಂದ್ಕೊಂಡ್ರೆ ಆಟೋ ಲಿ... ಅದರ DIGITAL METER ನೋಡಿ ನಮ್ಮ BP METER RAISE ಆಗಿ ಹೊಗೆ ಹಾಸ್ಕೊಂಡ್ರೆ ರಿಕ್ಷಾಲಿ...???

MALL ಗೆ ಹೋಗ್ಬಿಟು BUY 1 GET 1 ತಗೋಳಿ...ಅನ್ಯಾಯವಾಗಿ ನಮ್ಮ RATE ಸೇರಸಿ ಫಿಕ್ಸ್ ಮಾಡಿರ್ತಾರೆ ಅದರಲಿ ...

ಒಳಗಡೆ ಕುತ್ಕೊಂಡ್ರೆ ಡಕೋಟ ತರ ಹೋಗೋ BMTC ಹೊರಗಡೆ OVERTAKE  ಮಾಡೋಕೆ ಹೋದರೆ EXPRESS ಹೋಗೋ ತರ  ಅನ್ನಿಸೋತೆ ಇಲ್ಲಿ ..

ಹಾಯಾಗಿ  ಹುಡುಗಿನ ಕರ್ಕೊಂಡು ಬೆಂಗಳೂರು ಸುತ್ತೋಣ ಅಂದ್ರೆ ಅನ್ಯಾಯವಾಗಿ AVOID GIRL FRIEND SAVE PETROL ಬರುತದೆ ನೆನಪಲಿ ...

FM ಗಳ ಹಾವಳಿ ಬಂತು EARPHONE ಹುಡುಗಿರ ಕಿವಿಯಲಿ  ..

ನನ್ನ ನೋಡಿ ನಕ್ಕಳು ಗುಂಪಿನಲ್ಲಿ ಅಂದ್ಕೊಂಡ್ರೆ RADIO ಮಿರ್ಚಿ ಲಿ RJ  ಪ್ರದೀಪ್ ಜೋಕ್ ಮಾಡ್ತಾ ಇದಾನೆ ಅಂತಾರೆ ಏನ್ಮಾಡೋದು ನೀವೇ ಹೇಳಿ ...

ಯಾರ ಸಹವಾಸನು ಬೇಡ ನಮ್ಮ ಪಾಡಿಗೆ ನಾವು ಹೋಗಣ ಅಂದ್ರೆ ಹುಡುಗಿ ಕೊಟ್ಟ ಮಾವನ ತರ ನಮ್ಮTRAFFIC POLICE  ಬಾಯಿಗೆ MACHINE  ಇಡ್ತಾರೆ ಜೇಬಿಗೆ ಕತ್ರಿ ಹಾಕ್ತಾರೆ ಈ ಬೆಂಗಳೂರಿನಲಿ..

ಹೋಗ್ರಪ್ಪ ರಸ್ತೇಲಿ ಹೋಗೋರಿಗೆ ಕಷ್ಟ ಸುಖ ಮಾತಾಡಣ ಅಂದ್ಕೊಂಡ್ರೆ ಎನಂಡಿ ಕನ್ನಡ ನಾಕು ರಾದು ಅಂತಾರೆ ತೆಲುಗು ಭಾಷೇಲಿ..

ಸ್ವಲ್ಪ ಹೊತ್ತು ನಿಶ್ಯಬ್ಧದ ಮದ್ಯ ದ್ಯಾನ ಮಾಡೋಣ ಅಂದ್ಕೊಂಡ್ರೆ ಯುವ ಪ್ರೇಮಿಗಳು ನಮ್ಮ ದ್ಯಾನನ ಭಂಗ ಮಾಡ್ತಾರೆ PARK ನಲಿ ...

ಇದು ನಮ್ಮ ಬೆಂಗಳೂರು ಇಂದಿನ ಸಮಚಾರದಲಿ .....


Tuesday, November 1, 2011

ಬಾರಿಸು ಕನ್ನಡ ಡಿಂಡಿಮವ ...



ಅ ಆ ಇ ಈ ಕಲಿಯೋಣ ...
ಅನ್ಯರಿಗೆ ಕಲಿಸೋಣ ...
ಕನ್ನಡ ಡಿಂಡಿಮವ ಬಾರಿಸೋಣ ..
ಅಣ್ಣ ತಮ್ಮಂದಿರಂತೆ ಬಾಳೋಣ ...
ಬೇರೆಯವರಿಗೆ ನಾವು ಮಾದರಿಯಾಗೋಣ  ...
ಇಂದಿಗೂ ಎಂದೆಂದಿಗೂ ಜೈ ಕರ್ನಾಟಕ ಅನ್ನೋಣ ..
ನಾವು ಕನ್ನಡಿಗರು ಅನ್ನೋ ಮಾತು ಹೆಮ್ಮೆಯಿಂದ  ಹೇಳೋಣ...
ಕನ್ನಡವನ್ನು ಹೊತ್ತು ಹೆತ್ತು ಪ್ರೀತಿಯಿಂದ ಬೆಳೆಸೋಣ...

ಸಮಸ್ತ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ....

.

Sunday, October 30, 2011

ನೋಡ ನೋಡುತ ...

ಅಂದು ಆ ಗುಂಪಿನಲಿ ನಿನ್ನ ನಾ ಕಂಡೆನು ..
ಮನ ಕೂಗಿ ಕರೆಯಿತು ನಿನ್ನನು .....
ತಿರುಗಿ ನೀ ನೋಡಲಿಲ್ಲ ನನ್ನನು ...
ನೋಡ ನೋಡುತ ಕದ್ದಳು ನನ್ನ ಮನಸ್ಸನು ...
ಪ್ರತಿದಿನ ಕನಸಲಿ ನಾ ನೋಡುತಿರುವೆ ನಿನ್ನನು ...
ಹೇಗೆ ಹೇಳಲಿ ನಿನಗೆ ಈ ನನ್ನ ಪ್ರೀತಿಯನು ...
ನಿನಗಾಗಿ ಕಾಯ್ದಿರಿಸಿರುವೆ ನನ್ನ ಹೃದಯದಲಿ ಪುಟ್ಟ ಜಾಗವನು...
ಮರೆಯಾದ ಅವಳಿಗಾಗಿ ಇಂದಿಗೂ ಹುಡುಕುತಿದೆ ಈ ನನ್ನ ಕಣ್ಣು ...
ಹೇ ಹುಡುಗಿ ಎಲ್ಲಿರುವೆ ನೀನು ...
ನಿನಗಾಗಿ ನಾ ಕಾಯುತಿರುವೆನು ....

Wednesday, October 26, 2011

ಮನದಾಳದ ಮಾತು: ಚೆಲುವೆಯ ನೋಡುತ ........

ಮನದಾಳದ ಮಾತು: ಚೆಲುವೆಯ ನೋಡುತ ........: ಸವಿ ಗಾಳಿಯ ಸಿಹಿ ನೆನಪಿನ ಈ ಅಂಗಳದಲಿ .... ಕಹಿ ನೆನಪಿನ ಸವಿ ಬಾಳ್ವೆಯ ಮುಗಿಲಿನ ಮರೆಯಲಿ ... ಅಂದು ನೀ ಮರೆಯಾದೆ ಚಲಿಸುತಿಹ ಮೋಡದ ಮುಸುಕಿನಲಿ ... ಇಂದು ನಿನ್ನ ನಾ ...

ಚೆಲುವೆಯ ನೋಡುತ ........

ಸವಿ ಗಾಳಿಯ ಸಿಹಿ ನೆನಪಿನ ಈ ಅಂಗಳದಲಿ  ....
ಕಹಿ ನೆನಪಿನ  ಸವಿ ಬಾಳ್ವೆಯ ಮುಗಿಲಿನ ಮರೆಯಲಿ ...
ಅಂದು ನೀ ಮರೆಯಾದೆ ಚಲಿಸುತಿಹ ಮೋಡದ ಮುಸುಕಿನಲಿ  ...
ಇಂದು ನಿನ್ನ ನಾ ಕಂಡೆ ಪ್ರಕಾಶಿಸುತಿಹ ಹುಣ್ಣಿಮೆಯ ಚಂದಿರನಲಿ  ....

Tuesday, June 21, 2011

ತಾಳಿ ಕಟ್ಟಿ ಪ್ರೀತಿ ಮಾಡಿ.....

ಇವಳು ನನ್ನವಳು ಎನುತಿರಲು 
                         ನಿನಗಾಗಿ ಬರೆದಿರುವೆ ಈ ನನ್ನ ಮನದ ಮಾತನು ......
ಪ್ರೀತಿಯ ಸಂದೇಶ ಹೇಳಲು 
                         ಗೀಚಿದೆ ನಿನಗಾಗಿ ಪ್ರೀತಿಯ ಪತ್ರವನು .....
ಪ್ರೀತಿಯ ಹಾಡನು ಹಾಡಲು
                         ಸ ರಿ ಗ ಮ ಪ ದ ನಿ ಸ ನಿನಗಾಗಿ ಕಲಿಯುವೆನು ...                        
LOVE U DEAR ಹೇಳಲು 
                         ನಿನಗಾಗಿ ಪ್ರತಿದಿನ ಕಾಯುವೆನು ....
ನಿನ್ನ ನಗು ಮೊಗವ ನೋಡಲು 
                         ನನ್ನ ಮನದ ಕಿಟಕಿಯ ತೆರೆಯುವೆನು....
ನಿನ್ನ ಮಾತನು ಕೇಳಲು 
                         ನಿನ್ನ ಮೊಬೈಲ್ ಗೆ call ಮಾಡುವೆನು ...
Call Waiting ಬರುತಿರಲು 
                         ನಾ ಪಡೆದೆ ನಿನ್ನ ಮದುವೆಯ ಆಮಂತ್ರಣ ಪತ್ರವನು ...
ಮದುವೆಗೆ ನಾ ಬರುವೆ ಕೊನೆಯ ಬಾರಿ ನಿನ್ನ ನೋಡಲು 
                         ನೂರು ವರುಷ ಹರುಷದಿ ಬಾಳು ಎನುತ ಹಾಕುವೆ ಅಕ್ಷತೆ ಕಾಳನು....
ಕೇಳಬೇಡಿ ನನ್ನ Tragedy Story ಯನು
                          ಇನ್ನು ಮುಂದೆ ತಾಳಿಕಟ್ಟಿದ ಮೇಲೆ ಪ್ರಾರಂಭಿಸಿ ಪ್ರೀತಿಯನು ........

Friday, June 10, 2011

ಮನದಾಳದ ಮಾತು: ಮುಂಗಾರು ಮಳೆ

ಮನದಾಳದ ಮಾತು: ಮುಂಗಾರು ಮಳೆ: "ನಮ್ಮೂರಿಗೆ ಮುಂಗಾರಿನ ಆಗಮನ .... ಹಕ್ಕಿಯ ಆ ಚಿಲಿಪಿಲಿ ಗಾನ .... ಮನಕ್ಕೆ ಹಿತವೆನಿಸೋ ಈ ತಣ್ಣನೆಯ ವಾತಾವರಣ ... ಮನಸ್ಸಲಿ ಏನೋ ರೋಮಾಂಚನ .... ಗುಡುಗು ಮಿಂಚಿನ ರುದ್ರ..."

ಮುಂಗಾರು ಮಳೆ




ನಮ್ಮೂರಿಗೆ ಮುಂಗಾರಿನ ಆಗಮನ ....
ಹಕ್ಕಿಯ ಆ ಚಿಲಿಪಿಲಿ ಗಾನ ....
ಮನಕ್ಕೆ ಹಿತವೆನಿಸೋ ಈ ತಣ್ಣನೆಯ ವಾತಾವರಣ ...
ಮನಸ್ಸಲಿ ಏನೋ ರೋಮಾಂಚನ ....
ಗುಡುಗು ಮಿಂಚಿನ ರುದ್ರ ನರ್ತನ ...
ಬಿಸಿಲು ಮೋಡದ ಸಮ್ಮಿಲನ ...
ಎಲ್ಲೇಲ್ಲೂ ಹಸಿರಿನ ಸಿಂಚನ ...
ಚಪ್ಪರಿಸೋ ನಾಲಿಗೆ ಬಯಸಿತು ಚಕ್ಕುಲಿ ಹಪ್ಪಳ ಈ ಕ್ಷಣ ...
ಪ್ರಕ್ರತಿಯ ಈ ಸೌಂದರ್ಯ ಸೊಬಗಿನ ಚಿತ್ರಣ ..
ನೋಡುತಿಹ ಈ ನಮ್ಮ ನಯನಗಲೇ ದನ್ಯ ....


Wednesday, May 18, 2011

ನಿನಗಾಗಿ .........

ನನ್ನ ನಾ ಮರೆತೆ ನಿನ್ನ ಆ ನೆನಪಲಿ ....
ಸೂರ್ಯನ ಶಾಖವ ಅರಿತೆ ಆ ನಿನ್ನ ನೋಟದಲಿ ...
ಚಂದಿರನ ಇಂಪನು ನಾ ನೋಡಿದೆ ನಿನ್ನ ಮುಖದಲಿ ...
ಸಿಲಿಕಿದೆ ನಾ, ಗಾಳಿಯಲಿ ತೇಲುತಿಹ  ಆ ನಿನ್ನ ಕೂದಲಿನ ಸುಳಿಯಲಿ ...
ನಾ ಮರೆಯಾದೆ ಆ ನಿನ್ನ ನಗುವಿನ ಸಿಂಚನದಲಿ.....
ಇರಬೆಕೆಂದೆನಿಸುತಿದೆ ಸದಾ ನಿನ್ನ ಜೊತೆಯಲಿ ....
ನಿನಗಾಗಿ ಕಾದಿರಿಸಿರುವೆ ಪುಟ್ಟ ಜಾಗ ಈ ನನ್ನ ಮನದಲಿ ....


Tuesday, March 8, 2011

ಮಹಿಳೆಯರ ದಿನಾಚರಣೆಯ ಶುಭಾಯಗಳು ......

ನಗು ಮೊಗದ ಸ್ನೇಹಿತೆಯಾಗಿ ...
ಬುದ್ಧಿಹೇಳೋ ಅಕ್ಕನಾಗಿ ಮುದ್ಧಿನ ತಂಗಿಯಾಗಿ  ...

ತವರಿಗೆ ಕಳಶವಾಗಿ ....

ಹೆತ್ತವರಿಗೆ ಪ್ರೀತಿಯ ಮಗಳಾಗಿ ...
ಕೊಟ್ಟ ಮನೆಗೆ ದಾರಿಧೀಪವಾಗಿ   ...

ಎಲ್ಲರೂ ಮೆಚ್ಚುವಂತ ಗ್ರಹಿಣಿಯಾಗಿ... 
ಪತಿಯ  ನೆಚ್ಚಿನ ಪತ್ನಿಯಾಗಿ .. 
ಪ್ರೀತಿಯ ಅಮ್ಮನಾಗಿ ....
ಕಷ್ಟದಲ್ಲಿರುವವರಿಗೆ  ನೆರವಾಗಿ  ....
ಇತರರಿಗೆ ಮಾದರಿಯಾಗಿ ....
ಸದಾ ಒಳಿತನ್ನು ಭಯಸೋ ಮಹಿಳೆಯರಿಗೆ ಇಂದಿನ ದಿನದ ಶುಭಾಷಯಗಳು ...... 



Monday, February 28, 2011

ಚೆಲುವೆಯ ನೋಡುತ .....

ಅವಳೇ ಚೆಂದೂರ ಬಾಲೆ   ....
ನಾ ನಿನ್ನ ಪ್ರೀತಿಸಲೇ ...
ಕಣ್ಣಲ್ಲಿ ಕಣ್ಣಿಟ್ಟು ನಾ ನಿನ್ನ ನೋಡಲೇ ....
ನಿನ್ನ ಸನಿಹಕೆ ನಾ ಬರಲೇ ...
ನನ್ನ ಮನಸ್ಸಲ್ಲಿ ಪ್ರೀತಿಯ ಗೋಪುರ ಕಟ್ಟಿಸಲೇ ...
ನಾ ನಿನ್ನ ಕೈ ಹಿಡಿಯಲೇ ...
ನಿನಗಾಗಿ ನಾ ಕಾಯಲೇ ....
ಇಂದು ಮುಂದು ಎಂದೆಂದೂ ನಿನ್ನ ಜೊತೆ ನಾ ಬಾಳಲೇ ...
ನಿನ್ನ ಉತ್ತರ ಹೇಳುವೆಯ ಈಗಲೇ ....


Friday, February 25, 2011

ಬದುಕು ಜಟಕಾ ಬಂಡಿ ...

ಹುಟ್ಟಿದಾಗ ಏನು ತರಲಿಲ್ಲ ...
ಸಾಯೋವಾಗ ಏನು ಒಯ್ಯೂದಿಲ್ಲ  ..
ಆಸೆಯೇ ದುಃಖಕ್ಕೆ ಮೂಲ ..
ಅಸೂಹೆ ಒಳ್ಳೇದಲ್ಲ  ...
ನೋಡುತಿಹುದು ನಿನ್ನ ಜಗವೆಲ್ಲ ...
ಬಯಸದಿರು ಕೆಡುಕ ಅನ್ಯರಿಗೆಲ್ಲ ...
ಉಪಯೋಗಿಯಾಗಿರು ಪರರಿಗೆಲ್ಲ ...
ಲಕ್ಷ ಲಕ್ಷ ದುಡ್ಡಿನಿಂದ ಬಾರದು ನೆಮ್ಮದಿಯೆಲ್ಲಾ....
ಸುಖದಲ್ಲಿ ಇರೋವವರು ದುಃಖದಲ್ಲಿ  ಇರೋದಿಲ್ಲ ...
ಇತರರಿಗೆ ಮಾದರಿಯಾಗಿ ಸಂತೋಷದಿಂದ ಇರಲು ಪ್ರಯತ್ನಿಸು ಜೀವನವೆಲ್ಲ ...


Monday, February 14, 2011

ಪ್ರೀತಿ ಮಧುರ ತ್ಯಾಗ ಅಮರ

ಪ್ರೀತಿ ಮಧುರ ತ್ಯಾಗ ಅಮರ

ಗೆಳೆತನದಿಂದ ಪ್ರಾರಂಭವಾಗಿ.....
ಕಣ್ಣಿಗೆ ಕಣ್ಣು ಬೆರೆತು ಸಂಗಮವಾಗಿ ..
ಅರಿಯದೆ  ಮನಸ್ಸು ಬೆರೆತು ಸಮ್ಮಿಲನವಾಗಿ ...
ಮನದಲ್ಲಿ ಹೊಸತನವು ಉದಯವಾಗಿ ....
ಜಾತಿ ಮತ ಬೇಧ ಮೇಲು ಕೀಳೆಂಬ ಅನೈತಿಕತೆಯನ್ನು ಬದಿಗೊತ್ತಿ...
ಕಷ್ಟ ಸುಖಗಳಿಗ ಇಬ್ಬರೂ ಭಾಗಿಯಾಗಿ ....
ಈ ದಿನದಂದು ನಿಮ್ಮ ಪ್ರೀತಿ ಪ್ರೇಮ ಪ್ರಾರಂಭವಾಗಿ ...
ಕಣ್ಣಿಗೆ ಕಾಣುವ ದೇವರು ಹೆತ್ತವರ ಆಶಿರ್ವಾದದೊಂದಿಗೆ ...
ಒಬ್ಬರನ್ನೊಬ್ಬರು ಅರಿತು ಬೆರೆತು ಅಮರ ಪ್ರೇಮಿಯಾಗಿ ...
ಹೆತ್ತವರಿಗೆ ನೋಯಿಸದೆ ಸುಖಕರ ಜೀವನ ನಡೆಸಿ ಇತರರಿಗೆ ಮಾದರಿಯಾಗಿ ....

   

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ..

ಪ್ರೇಮಿಗಳಿಗೊಸ್ಕರ ,ಪ್ರೇಮಿಗಳಿಗಾಗಿ ಮೀಸಲಾಗಿರೋ ಈ ದಿನ ...
ಮುಕ್ತ ಮನಸ್ಸಿನ ಬಾಂಧವ್ಯಕ್ಕೆ ಸಾಕ್ಷಿಯಾಗೋ ಈ ಸುಧಿನ ...
ಸಾರಿ ಸಾರಿ ಕರೆಯುತಿದೆ ನಿನ್ನನು ಈ ನನ್ನ ಮನ ...
ನನ್ನ ಮುಂದೆ ಪ್ರತ್ಯಕ್ಷವಾಗು ಈ ಕ್ಷಣ ...
ಕಾಯುತಿರುವ ಆ ನಿನ್ನ ಪ್ರೀತಿಯ ಅಪ್ಪುಗೆಯ ಆಲಿಂಗನ ...
ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸೋಣ ...
Romeo,Juliet,laila,majnu ನ ಸ್ಮರಿಸೋಣ ...
ಪ್ರೇಮಿಗಳಿಗ ಅಭಯ ಹಸ್ತ ನೀಡೋಣ ...
ಅಮರ ಪ್ರೇಮಿಗಳನ್ನು ಒಂದುಗೂಡಿಸಲು ಪ್ರಯತ್ನಿಸೋಣ ...  


Friday, February 11, 2011

24/7 ಜೀವನ ಸಾಗುತದೆ .....

ಮುಂಜಾನೆಯ ಬೆಳಕಿಗೆ ಹಕ್ಕಿ ಪಿಸುಗುಟ್ಟುತಿದೆ ....
ಮಧ್ಯಾನದ  ಬಿಸಿಲಿಗೆ ಜಗವೇ ಸುಡುತಿದೆ  ....
ಮುಸ್ಸಂಜೆಯ ಗಾನಕೆ ಮನ ತಂಪಾಗಿದೆ ...
ಮೌನದ ರಾತ್ರಿಗೆ ಚಂದ್ರನ ಬೆಳಕಿದೆ ..
ರಾತ್ರಿಯ ರಾಗಕೆ ಲೋಕವೇ ಮಲಗಿದೆ ....

Tuesday, February 8, 2011

ಜಸ್ಟ್ ಮಾತ್ ಮಾತಲಿ........

ಪ್ರೀತಿ ಅಮರ ...
ತ್ಯಾಗ ಮಧುರ ....
ಮನಸ್ಸು ಭ್ರಮರ ....
ಆಸೆ ಅನ್ನೋ ಸಾಗರ ...

ಹಿರಿಯರಿಗೆ ತಲೆ ತಗ್ಗಿಸಿ ಹೇಳಿ ನಮಸ್ಕಾರ ....
ಬಯಸಿ ಅನ್ಯರಿಗೆ ಉಪಕಾರ ...

ಬಯಸದಿರಿ ಅವರಿಂದ ಪ್ರತ್ಯುಪಕಾರ ....
ಕಟ್ಟಿರಿ ಕನಸಿನ ಗೋಪುರ ...

ಏರಲು ಪ್ರಯತ್ನಿಸಿ ಸಾಧನೆಯ ಶಿಖರ...
ಒಗ್ಗಟ್ಟಿನಿಂದ ಮೊಳಗಿಸಿ ಜಯದ ಜೇಂಕಾರ ...

ತೀರದ ದುಡ್ಡಿನ ಆಹಾಕರ ...
ಊಹಿಸಬೇಡಿ ದ್ವೇಷದ ಪ್ರತೀಕಾರ ...
ಮರೆಯಬೇಡಿ ಪ್ರೀತಿಯ ಸ್ನೇಹಿತರ ...

  

Monday, February 7, 2011

ಜೈ ಕರ್ನಾಟಕ ಮಾತೆ.....

ಕರ್ನಾಟಕ ಕನ್ನಡ ನಾಡಿದು ....
ಕಾವೇರಿ ನೀರು ಹರಿಯುವ ಪುಣ್ಯ ಭೂಮಿ ಇದು ...
ಹಂಪಿ,ಬನವಾಸಿ,ಬೇಲೂರು ,ಹಳೆಬೀಡು ಪುರಾತನ ಕ್ಷೇತ್ರಗಳ ತಾಣವಿದು ...
ರನ್ನ,ಪಂಪ,ಕುವೆಂಪು,ಬೇಂದ್ರೆಯಂತಹ ಮಹಾನ್ ಕವಿಗಳ ಬೀಡಿದು ...
ವೀರ ಮದಕರಿ ಆಳಿದ ಸ್ಥಳವಿದು  ...
ಪುರಾತನ ಸಂಸ್ಕೃತಿಯ ತಂಗುದಾಣವಿದು ...
ಹಸಿದವರಿಗೆ,ಕೇಳಿ ಬಂದವರಿಗೆ ,ನಮಗೆಲ್ಲ ಆಶ್ರಯ ಕೊಟ್ಟಿರುವ ನೆಲವಿದು ...
ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿರುವ ನಾವು ನೀವೆಲ್ಲರೂ ಪುಣ್ಯವಂತರು ....
ಎಲ್ಲರೂ ಸೇರಿ ಕನ್ನಡ ಮಾತೆಗೆ ನಮಿಸೋಣ ....
ಕನ್ನಡ ಡಿಂಡಿಮವ ಭಾರಿಸೋಣ ..

Wednesday, February 2, 2011

ಓ ನನ್ನ ಮನಸ್ಸೇ ...........


ಓ ನನ್ನ ಮನಸ್ಸೇ ಎಲ್ಲಿರುವೆ ಏನು ....
ಪ್ರೀತಿ ಅನ್ನೋ ಸುಳಿಯಲ್ಲಿ ಸಿಲುಕಬೇಡ ನೀನು...
ಗೆಲ್ಲಲು ಪ್ರಯತ್ನಿಸು ಅವಳ ಮನವನು ...
ನಿನ್ನ ಜೊತೆಯಾಗಿರುವೆ ಎಂದೆಂದೂ ನಾನು ...

ಪ್ರೀತಿಯ ಹೇಳದೆ  ಹಾಗೆಯೇ ನಶಿಸುವುದು   ...
ಹೊರಗಡೆ ಬಾರದೆ ಒಳಗೊಳಗೇ ನರಳುವುದು ...
ಕಾಯ ಬೇಡ ಕಾಯಿಸ ಬೇಡ ಒಮ್ಮೆ ಹೋದ ಮನಸ್ಸು ಪುನಃ ಬಾರದು....
ಮಂಜಿನ ಹಾಗೆ ಒಳಗೊಳಗೇ ಕರಗುವುದು ...
ಓ ಮನಸ್ಸೇ ಒಮ್ಮೆ ನನ್ನ ಸಮ್ಮತಿಸು ...
ಎಂದೆಂದೂ ನೀನು ನನ್ನನ್ನೇ ಪ್ರೀತಿಸು ...


Monday, January 31, 2011

ಜೊತೆ ಜೊತೆಯಲಿ ....


ನೀ ಭೂಮಿಯಾದರೆ ನಾನಾಗುವೆ ಭಾನು ....
ಮಳೆಯಾಗಿ ಧರೆಗಿಳಿಯುವೆ ನಿನ್ನ ಸೇರಲು ...
ಚಳಿಯಾಗಿ ಬರುವೆ ನಿನ್ನ ತಂಪಾಗಿರಿಸಲು ...
ಮೊಡವಾಗುವೆ ಬಿಸಿಲನ ತಡೆಯಲು ...
ಗಾಳಿಯಗುವೆ ನಿನ್ನ ಉಸಿರಾಗಲು ...
ನಾ ಬಯಸುವೆ ಎಂದೆಂದೂ ನಿನ್ನ ಜೊತೆಗಿರಲು ....
ನಿನ್ನ ಕೈ ಹಿಡಿದು ಬಾಳಲು ....

Wednesday, January 26, 2011

ಹುಡುಗರ ಪಾಡು ಭಲ್ಲವರಾರು ....


ಇದು ಮೋಸ ಹೋದ ನನ್ನ ಸ್ನೇಹಿತನಿಗಾಗಿ ...
ಇದು ಕೇವಲ Backgrnd ನೋಡಿ love ಮಾಡೋ ಹುಡುಗಿಯರಿಗಾಗಿ.. ಮೋಸ ಹೋಗೋ ಹುಡುಗರಿಗಾಗಿ ಕೆಲವು ಸಾಲುಗಳು ...

ಪ್ರೀತಿ ಕೊಟ್ಟ ಹುಡುಗಿ ಕೈ ಕೊಟ್ಟಳು ..
ಮನಸ್ಸ ಕೊಟ್ಟ ಹುಡುಗಿ time pass ಅಂದಳು ...
ಜೊತೆಗಿದ್ದು error ಹುಡುಕಿದವಳು ಕೊನೆಗೆ invalid selection ಅಂದಳು ..
ನೀನೆ diode ನಾನೆ capacitor ಅಂದವಳು whole circuit short ಮಾಡಿ ಹೊರಟು ಹೋದಳು  ,...
ನೀನೆ ನನ್ನ ಕನಸಿನ ರಾಜ ಅಂದವಳು ಕೇವಲ ಕನಸಾದಳು....
love ಮಾಡಿದವಳು dove ಮಾಡಿದಳು ...
propose ಮಾಡಿದವಳು dispose ಆದಳು....
ನನ್ನ ನಂಬು ಅಂದವಳು ಕೈಗೆ ಚೊಂಬು ಕೊಟ್ಟಳು ...
ನಾ ನಿನ್ನ ಮರೆಯಲಾರೆ ಅಂದವಳು ಎಲ್ಲೋ ಮರೆಯಾದಳು ...
ನೀನೆ ನನ್ನ ಜೀವ ಅಂದವಳು java ಕಲಿತವನ ಜೊತೆ ಪರಾರಿಯಾದಳು ...
ಮೊದ ಮೊದಲಿಗೆ hiii byeee ಅಂದವಳು ಕೊನೆಗೆ ಬಾವಿಗೆ ಬಿದ್ದು ಸಾಯಿ ಅನ್ನುವಳು ...
college days jolly days ಅಂದ ಹುಡುಗಿರು ಇವಾಗ ದುಡ್ಡೇ ದೊಡ್ಡಪ್ಪ ಅನ್ನುವರು ...
ಅವರು ಹೇಳಿದ ಕೆಲಸ ಮಾಡುವ ಹುಡುಗರು ಕೊನೆಗೆ ಆದರು use ಮಾಡಿದ tissue ಪೇಪರು ...
ಇಷ್ಟೆಲ್ಲಾ ಆದರು ಹಾಳಾದ್ ಹುಡುಗರ ಬುದ್ದಿ ಹೋಗ್ತಾವೆ ಹುಡುಗೀರ ಹಿಂದೆ ಮೋಸ ಹೋಗಲು ....

ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು,..


ಇತಿಹಾಸದ ಇಂದಿನ ಈ ಕ್ಷಣ ....
ಸ್ಮರಿಸೋಣ ದೇಶಕ್ಕಾಗಿ ಪ್ರಾಣ ತೆತ್ತ ಮಹಾನ್ ನಾಯಕರುಗಳನ......
ಭಾರತದ ೬೧ ನೇ ಗಣರಾಜ್ಯೋತ್ಸವದ ದಿನ...
ರಚಿಸಲ್ಪಟ್ಟಿತು ಭಾರತ ಸಂವಿಧಾನ .....
ಎಲ್ಲರೂ  ಸೇರಿ ಸಲ್ಲಿಸೋಣ ಜಾತ್ಯತೀತ,ಪ್ರಜಾತಂತ್ರ ಭಾರತ ದೇಶಕ್ಕೆ  ನಮನ ...
ಜೈ ಹಿಂದ್....

Tuesday, January 25, 2011

ಹಿಂದುಸ್ತಾನಿ ಸಂಗೀತ ಸಾಮ್ರಾಟ್ ಭೀಮಸೇನ ಜೋಶಿ .....


ಭೀಮಸೇನ ಹೆಸರಲ್ಲಿದೆ ಸಿಂಚನ  ...
ಸ್ವರ ಮಾಂತ್ರಿಕನ ರಾಗ ತಾನ....
ಭಕ್ತಿ ,ಹಟ,ಶಕ್ತಿ ,ರಾಗ ,ತಾಳದ ದುರಿಣ ...
ಅವರ ಗಾಯನ ಶೈಲಿ ಇತರರಿಗಿಂತ ಬಿನ್ನ ...
ಅಲಂಕರಿಸಿದರು ಭಾರತ ರತ್ನ ...
ಕೇಳಿದರೆ ಕೇಳುತಲೇ ಇರಬೇಕೆನ್ನೋ ಅವರ ಗಾಯನ ....
ಇಂದು ನಮ್ಮೆಲರನ್ನು ಬಿಟ್ಟು ಸ್ವರ್ಗಾಲೀನರಾಗಿರೋ ಸಂಗೀತದ ಒಡೆಯ ಭೀಮಸೇನ ಜೋಶಿಯವರಿಗೆ ಭಕ್ತಿಪೂರ್ವಕ ಶ್ರಧಾಂಜಲಿ ಅರ್ಪಿಸೋಣ ....

Friday, January 21, 2011

ಇಂದು ನಾ ನೋಡಿದೆ ಚೆಲುವೆಯ ...



ಇಂದು ಹೋಗುತಾ ಇದ್ದೆ ಡಕೋಟ ಬಸ್ಸಿನಲಿ  ...
ಕೂತಿದ್ದೆ  back ಸೀಟಿನಲಿ ...
ಬಸ್ ನಿಂತಿತು ಮಣಿಪಾಲ್ standನಲಿ ....
ಚೆಲುವೆ ಒಬ್ಬಳು ಬಸ್ ಹತ್ತಿದಳು catwalkನಲಿ ..
shock ಹೊಡೆದಾಗ್  ಆಯಿತು heartನಲಿ  ...
ಕೂತಳು front cornerಲಿ ...
ಒಮ್ಮೆ ತಿರುಗಿ ನೋಡು ನನ್ನಲಿ ...
ನೋಡ್ತೀನಿ ನಿನ್ನನು ನಾನು front viewನಲಿ ...
ಕೊನೆಗೂ ಚೆಲುವೆಯ ನೋಡಿದೆ 3d angleನಲಿ ...
ಬಂದೆ ಬರುತಾಳೆ ಅವಳು ಇಂದಿನ ನನ್ನ ಕನಸಿನಲಿ ....  

Thursday, January 20, 2011

ಕೊಳಕು ರಾಜಕೀಯ .......


ಅ ಆ ಇ ಈ ಜ್ಞಾನವಿಲ್ಲದವ ಜನರಿಂದ ಆಯ್ಕೆಗೊಂಡ ಜನನಾಯಕ ...
ಮಾಡೋದು ಬರೀ ಕೆಟ್ಟ ಕಾಯಕ ...

ಕೈ ಎತ್ಬಿಟ್ಟು ದೇಹವನ್ನೂ ನುಂಗೋ  ಪಕ್ಷ ..
ನಂಬಿದರೆ ಕಮಲದ ಹೂ ೨ ಕಿವಿಗೆ ಇಡೋ ಪಕ್ಷ ..
ತಲೆ ಮೇಲೆ ಹೊರೆ ಹೊರಿಸಿ ಆಮೇಲೆ ಚಪಡಿ ಎಳೆಯೋ ಪಕ್ಷ ...
ಸಮಯಕ್ಕೆ ತಕ್ಕಂತೆ ಬದಲಾಗೋ ಅವರ ಕಕ್ಷ ....ಕರ್ಮ ಕಾಂಡ...

ಹೆಂಡತಿ ಮಕ್ಕಳ ಹೆಸರಲ್ಲಿ 10 - 12 ಸೈಟು...
ಅದಕ್ಕಾಗಿ ಮಾಡ್ತಾರೆ ಫೈಟು ...
ಇವರನ್ನು ನಂಬೋದು ಅಟ್ಟರ್ ವೇಸ್ಟು ...
ಸಿಕ್ಕಿದಾಗ ಕೊಡಿ ಅವರಿಗೆ ಬಿಟ್ಟಿ ಚಪ್ಪಲಿ ಏಟು ...

ನಾರಿಗೆ ಸೀರೆ ಕೊಟ್ಟ ಮುಖ್ಯಮಂತ್ರಿ ...
ನಂಬಿದರೆ ಅದೋ ಗತಿ ...
ಅವನೇ ಅಸ್ಸಾಮಿ ಕುಮಾರಸ್ವಾಮಿ ಕಮಲವನ್ನು ಸೆರೆಹಿಡಿತಾನೆ CDಯಿಂದ ...
ಆದರೆ ಮೋಸ ಹೋಗ್ಬಿಟ್ಟ ನಿತ್ಯಾನಂದ ...
ಆ ರೆಡ್ಡಿ ಸಹೋದರರು ...
ಚಡ್ಡಿ ಬಿಟ್ಟು ಎಲ್ಲಾನು ಮಾರಿ ತಿಂದಾರು....
ಅವನೇ ರಾಮುಲು ...
ನಂಬಿದರೆ ಜನರಿಗೆ ಟೋಪಿ ಮಾಮೂಲು ...

ಇದು ಇಂದಿನ ನಮ್ಮ ರಾಜಕೀಯ ...
ಅಪೇಕ್ಷಿಸಬೇಡಿ ಅವರಿಂದ ಎಂದಿಗೂ ಸಹಾಯ ...
ನಂಬಿದರೆ ಕೊಡ್ತಾರೆ ಚಂಬು ಎಲ್ಲರೂ ಸೇರಿ ..
ನಾವೆಲ್ಲರೂ ಕಟ್ಟೋಣ ಅವರಿಗಾಗಿ ಗೋರಿ ...

ಇವರು ಜನರಿಂದ ಜನರಿಗಾಗಿ ಜನರಿಗೋಸ್ಕರ ಆಯ್ಕೆಯಾದ ಮಂತ್ರಿಗಳು ..ತು ಅವರ ಬಾಯಿಗೆ ಮಣ್ಣು ಹಾಕ ...
ಇವು ಕೊಳಕು ರಾಜಕೀಯದ ಸಾಲುಗಳು .....



Monday, January 10, 2011

ಕ್ಷಮಿಸಿ ಇದು ಕೇವಲ ತಮಾಷೆಗಾಗಿ ...

ಇದು ಬೆಂಗಳೂರು ಯುವಕರ ಗೋಳುಗಳು....

ವೋಲ್ವೋ ಬಸ್ಸಿನ ತಣ್ಣನೆಯ ACಲಿ ಹಾಯಾಗಿ ಹೋಗೋ ಹುಡುಗಿರ Heartಗಳು ..
ವೋಲ್ವೋ ಹಿಂದ್ಗಡೆ  BMTCತರ ಅಡ್ಡ ದಿಡ್ಡಿ ಓಡೋ ಹುಡುಗುರ ಮನಸ್ಸುಗಳು ...
Love@ 30*40 ಸೈಟ್ ಗಳು  ...
ಪ್ರೀತಿಯ ದಾರಿ ತಪ್ಪಿಸೋ Flyoverಗಳು ...
ಗಲ್ಲಿ ಗಲ್ಲಿಗೂ ಮನಸ್ಸಿನ ಓಟಕ್ಕೆ ತಡೆಯಾಗಿರೋ Metro Constructionಗಳು  Traffic Signalಗಳು ..
Green Signalಗಾಗಿ ಕಾಯೋ ನಮ್ಮ ಕಷ್ಟಗಳು ...
ಹೆಣ್ಣು ಕೊಟ್ಟ ಮಾವನ ಹಾಗೆ ದಾರಿಗೆ ಅಡ್ಡ ಬರೋ Traffic Policeಗಳು...
Polution ಜೊತೆ Mixಆಗಿ Echo ಹೊಡಿತಾ ಇರೋ ಯೋಗರಾಜ್ ಬಟ್ರ Dialogueಗಳು ...
ಕೊನೆಗೂ ವೋಲ್ವೋ ಬಸ್ಸಲ್ಲಿ ಹಾಯಾಗಿ ಕೂತಿರೋದು ಸಿಕ್ಕಿಲ್ಲ ಅನ್ನೋ ನಮ್ಮ ಸಂಕಟಗಳು ...
ಇಂದಿಗೂ ಎಂದೆಂದಿಗೂ ಇದು ಮುಂದುವರಿಯುವ  ಕಥೆಗಳು .....

Tuesday, January 4, 2011

ನಿನಗಾಗಿ ........

ಅವಳ ಆ ಹೂವಿನಂತಹ ಮನಸ್ಸು ಸುವಾಸನೆಯನು ಭೀರುತಿದೆ...
ಅವಳ ಆ ನೋಟಕ್ಕೆ ಚಂದ್ರನೇ ಮರೆಯಾಗಿದೆ ....
ಅವಳ ಆ ನಗುವಿಗೆ ಸೂರ್ಯನೇ ಸುಟ್ಟು ಹೋಗೋ ಹಾಗಿದೆ...
ಅವಳ ಸ್ಪರ್ಶಕ್ಕೆ ಮೋಡ ಕರಗಿ ನೀರಾಗಿ ಧರೆಗಿಳಿದಿದೆ...
ಅವಳ ಆ ಸುಂದರ ನಡಿಗೆಗೆ ಮಂಜು ನಾಚಿ ಹನಿಯಾಗಿದೆ ...
ಅವಳ ಇಂಪಾದ ದ್ವನಿಗೆ ಮುತ್ತು ಉರುಳುತಿದೆ ....
ಚೆಲುವೆ ನೀ ಎಲ್ಲಿರುವೆ ...ನಿನಗಾಗಿ ನಾ ಕಾದಿರುವೆ ಕಾಯುತಿರುವೆ ...

Monday, January 3, 2011

ಹೊಸ ವರುಷ ಹೊಸತನ ತರಲಿ ...

ಹೊಸ ವರುಷ ತರಲಿ ನಿಮಗೆ ಹರುಷ ...
ಹೊಸ ವರುಷದ ಕಲ್ಪನೆಯೇ ರೋಮಾಂಚಕ ...
ಹೊಸ ಹೊಸ ನಿರೀಕ್ಷೆಗಳು ಅಷ್ಟೇ ಉತ್ಸಾಹದಾಯಕ ...
ಮಾಡಬೇಡಿ ಕೆಟ್ಟ ಕಾಯಕ ....
ಬಯಸಬೇಡಿ ಅನ್ಯರಿಗೆ ಕೆಡುಕ ....
ಭೂತಕಾಲದ ಧುಖವನು ಮರೆತು ...
ವರ್ತಮಾನದ ಸಂತೋಷದಲ್ಲಿ ಬೆರೆತು ...
ಭವಿಷ್ಯತ್ ಎನ್ನೋ ಆಕಾಂಕ್ಷೆಯನು ಅರಿತು ...
ಸಂತೊಷ ಉತ್ಸಾಹದಿಂದ ಹೊಸ ವರುಷವನು ಭರಮಾಡಿಕೊಳ್ಳೋಣ ..

ಹೊಸ ವರುಷದ ಶುಭಾಶಯಗಳು ...